ಆಳವೆಂಬ ಅರಿವು

ಆಳದ ನೆಲೆಯಲ್ಲಿ ಕವಲುಗಳ
ಕುಸುರಿ ಕುಂದುವುದಿಲ್ಲ
ಅಧಿತ್ವದ ಸೊಗಸು ಜಡತ್ವ ಮೂಡದ
ಜಗಮಗಿಸುವ ಬೆಳಕು.
ಸ್ವಯಂಸ್ಪೂತರ್‍ತಿ ಸೆಲೆಯ
ಅರಗಿಸಿ ದಕ್ಕಿಸಿಕೊಳ್ಳಬೇಕು.

ಹರಳೆಣ್ಣೆ ಗಾಢವಾಗುರಿದರೆ
ಕಡುಕಪ್ಪು ಕಾಡಿಗೆ
ಚಿತ್ರ ಬರೆಯುತ್ತದೆ ಮುಚ್ಚಳದ ಅಂಚಿಗೆ.

ಹೊಸ ಸಂಕೇತಗಳಿಗೆ
ಹಳೆಯ ಸನ್ನೆಗಳೇ ಆಳಬಿಂಬಗಳು
ಕೂಡಿಕಳೆವ, ಭಾಗಿಸಿ ಗುಣಿಸುವ
ಲೆಕ್ಕಮಾಪನಗಳು
ಆಳದ ತೀವ್ರತೆಯ ಚುಕ್ಕಿಗಳು.

ಆಳದ ಹೊರಮೈ, ಒಳಮೈ
ಮೇಲೆ ಕೆಳಗೆ ಎಲ್ಲ ಕಡೆಯ
ಸಿಕ್ಕು ಬಸಿದು ನೆಕ್ಕಿ ಉಕ್ಕಬೇಕು, ಒಳಗಿನ
ವೀಣೆಯ ತಂತಿ ಮೀಟುವ ರಾಗಕ್ಕೆ
ನಿತಾಂತ ಹೊಸ ಚಿಗುರು
ಬಣ್ಣಗೂಡುತ್ತಿರಬೇಕು.

ಎದೆಗಿಳಿದ ಅಕ್ಷರಗಳು
ಶೋಕೇಸಿನ ಕಪಾಟಿನಲ್ಲಿ
ಗಾಜಿನಕೋಣೆಯಲ್ಲಿ ತಳತಳಿಸುವ
ಪದಕವಾಗಲ್ಲ..
ನೆಲಕ್ಕಿಳಿಯಬೇಕು,
ಕೆಸರ ಕೊಳದ ನೈದಿಲೆಯಾಗಬೇಕು.
ಬೆಳಕಿನ ಹಾಡ ಹೊಮ್ಮಿಸಬೇಕು.

ಆಳಕ್ಕಿಳಿದಷ್ಟು ಬಿಸಿಲ ತಣ್ಣಗೆ ಸವಿವ
ಸರಳತೆಯ ಇನಿತಿನಿತು
ಕರಗಿಸಿಕೊಳ್ಳಬೇಕು, ಅದಕ್ಕೆ ಆಳದ ಅರಿವ
ನಾನರಿತುಕೊಳ್ಳಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಲಾಲುದ್ದೀನ್ ಜಲಾಲಿ
Next post ಮಾಸ್ತರ್‌ಗಿಟ್ಟ ಮುಳ್ಳು, ಹೆಗಲಿಗೆ ಬಿತ್ತು ಡೊಳ್ಳು

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys